ಕಿತ್ತೂರು ವಿಜಯ ಸುದ್ದಿ.ಬೈಲಹೊಂಗಲ: ನೂತನ ಡಿ ವೈ ಎಸ್ ಪಿ ಡಾ ವೀರಯ್ಯ ಹಿರೇಮಠ ಅಧಿಕಾರ ಸ್ವೀಕಾರ
ಬೈಲಹೊಂಗಲ ಉಪವಿಭಾಗದ ನೂತನ ಡಿವೈಎಸ್ಪಿ ಯಾಗಿ ನೇಮಕಗೊಂಡಿದ್ದ ಡಾ ವೀರಯ್ಯ ಹಿರೇಮಠ ಅವರಿಗೆ ಡಿ ವೈ ಎಸ್ ಪಿ ರವಿ ನಾಯ್ಕ ಅವರು ಸೋಮವಾರ ಅಧಿಕಾರ ಹಸ್ತಾಂತರಿಸಿದರು.
ಪೊಲೀಸ್ ಪ್ರಧಾನ ಕಚೇರಿಯ ಕಾನೂನು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ವೀರಯ್ಯ ಹಿರೇಮಠ ಅವರನ್ನು ಸರ್ಕಾರ ಸಾರ್ವಜನಿಕ ಆಡಳಿತಾತ್ಮಕ ಹಿತದೃಷ್ಟಿಯಿಂದ ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಸೋಮವಾರ ಡಿ ವೈ ಎಸ್ ಪಿ ಕಚೇರಿಯಲ್ಲಿ ರವಿ ನಾಯ್ಕ ಅವರು ಅವರಿಗೆ ಅಧಿಕಾರ ಹಸ್ತಾಂತರಿಸಿದರು
0 Comments